N-2840 
  03-03-2025 08:25 AM   
ಬಸವತತ್ತ್ವ ಸಮಾವೇಶ (1-3-2025) ಆಶೀರ್ವಚನ : ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಈ ವಚನದ ಬಗ್ಗೆ ಪರಮಪೂಜ್ಯರು ವಿವರಣೆ ಅಕ್ಷರಶಃ ಸತ್ಯ-
ಇವನಾರವ, ಇವನಾರವ, ಇವನಾರವ? ನೆಂದೆನಿಸದಿರಯ್ಯಾ.
"ಇವ ನಮ್ಮವ, ಇವ ನಮ್ಮವ, ಇವ ನಮ್ಮವ" ನೆಂದೆನಿಸಯ್ಯಾ.
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ.
ಪರಮಪೂಜ್ಯರ ವಿವರಣೆಯನ್ನು ಕೇಳಿದ ನಂತರ, ನಾನುChatGPT ಯಲ್ಲಿ ಇಂಗ್ಲಿಷ್ ಅನುವಾದ ಮತ್ತು ವಿವರಣೆಯನ್ನು ಕೇಳಿದಾಗ ಉತ್ತರ ಅಷ್ಟು ಸಮಂಜಸವಾಗಿರಲಿಲ್ಲ. ನಾನು ಚಾಟ್ ಜಿಪಿಟಿಗೆ , ಇದು ಸರಿ ಇಲ್ಲ ಎಂದು ಮರು ಪ್ರಶ್ನೆ ಹಾಕಿದಾಗ , ಬಂದ ಉತ್ತರ ಕೆಳಕಂಡಂತಿದೆ -
"...For more in-depth understanding you might considering reach out to the Sri Taralabalu Jagadguru Brihanmath in Sirigere, where Dr. Shivamurthy Shivacharaya Mahaswamiji serves as current Pontiff".
ಇದರ ಭಾವಾರ್ಥ ಇಷ್ಟೇ, ಬಸವಾದಿ ಶಿವಶರಣರ ಬಗ್ಗೆ ಮಾತನಾಡುವುದಕ್ಕೂ ಮುನ್ನ, ಸೂಕ್ತ ಅಧ್ಯಯನ ಮತ್ತು ವಿಮರ್ಶೆ ಅತ್ಯಂತ ಮುಖ್ಯ ಕೆಲಸ, ಇದಕ್ಕೆ ಪರಮಪೂಜ್ಯರು ಮುನ್ನುಡಿ ಬರೆದಿದ್ದಾರೆ. ಇದನ್ನು ಮುಂದುವರಿಸಲು ಪರಮಪೂಜ್ಯರ ಅಧ್ಯಕ್ಷತೆಯಲ್ಲಿ " ಕೇಂದ್ರ ಭಾಷಾ ಅಧ್ಯಯನ ಸಂಸ್ಥೆ" ಒಂದು ಯೋಜನೆಯನ್ನು ಹಾಕಿಕೊಳ್ಳುವುದು ಉತ್ತಮ.
Dr. KP. Basavaraj
Banglore